ಬೆಳ್ತಂಗಡಿ :ಮಹಿಳೆಯೋರ್ವರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ನಾರ್ಯ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಶಾಂತ ಎಂದು ಗುರುತಿಸಲಾಗಿದೆ.ಮೃತ ಶಾಂತರವರು ಮನೆಯ ಹಿಂಬದಿಯಲ್ಲಿ ಬಟ್ಟೆ ತೊಳೆಯಲು ಸಾಬೂನು ತೆಗೆಯುವ ಸಂದರ್ಭ ಕಿಟಕಿಯಲ್ಲಿದ್ದ ವಿಷದ ಹಾವು ಎಡಗೈಯ ಕಿರುಬೆರಳಿಗೆ ಕಚ್ಚಿತ್ತು. ಮನೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಉಜಿರೆ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.